ಜೀವನವೆಂದರೆ
ಜೀವದೊಟ್ಟಿಗೆ ನಡೆಸುವ ಸಮರ
ಜೀವದ ಉಳಿಕೆ ಅಲ್ಪವೆ ಆದರೂ
ಜೀವನದ ಸಾಧನೆ ಅಮರ..
ಜಗವೆಲ್ಲ ಜರೆದರು
ಜಾರಬಾರದು ನಮ್ಮಯ ನಂಬಿಕೆ
ಜುಲುಮೆ ಜನಗಳ ಭಂಟ
ಜುಮ್ಮನೆ ಎರಗುವರು ಅದನಿಡಿದು..
ಜಾತಿ-ಬೇಧವ ಕಿತ್ತೆಸೆದು
ಜೈಸಬೇಕು ಮಾನವರಾಗಿ
ಜಂಗಿಡಿದ ಭಾವವ ತಳ್ಳಿ
ಜಿನುಗಿಸೋಣ ನಗುವ ಜಡವ ಮೀರಿ
- ಅ.ರಾ.ತೇಜಸ್
ಬರೆದ್ದದ್ದು - ೩೦/೦೩/೨೦೧೩
ವಿಶೇಷ: ಪ್ರತಿ ಸಾಲು ’ಜ’ ಅಕ್ಷರದ ಪದಗಳಿಂದ ಶುರುವಾಗಿದೆ
No comments:
Post a Comment