ಜನುಮಕ್ಕೆ ನೀ ಇರಲು
ಇರುವಷ್ಟು ನಗುವಿರಲಿ
ಅಳುವೆಲ್ಲ ಬದಿಗಿರಲಿ..
ಹೊತ್ತು ಸಲುಹಿದ ಕನಸು
ಒಮ್ಮೊಮ್ಮೆ ಆಗದು ನನಸು
ಹಾಗೆಂದು ಆ ಕನಸೇ ಅಲ್ಲ ಕೊನೆ
ಒಂದೊಳ್ಳೆ ಬದುಕಿಗೆ ಆಗುವುದು ಸೋನೆ..
ನೂರು ಹಾದಿಯ ಬದುಕು
ಸೊಗಸಾಗೆ ಇರದಲ್ಲ!
ಒಂದೊಂದು ದಾರಿಗೆ ನೂರೊಂದು ಮುಳ್ಳು
ಕೆಲವೊಂದು ಹಾದಿಯು ಹೂವಿನ ಹೊರಳು..
ಚುಚ್ಚಿದ ಮುಳ್ಳು ಮರೆಯಬೇಕು ಅಲ್ಲೆ
ಅಳ್ಳುತ್ತ ನಿಂತರೆ ಮುಂದೆಲ್ಲ ಕಲ್ಲೆ!!
ಹಲವು ಸರಿಗಳ ಮಧ್ಯೆ ಇರಲಾರದೆ ತಪ್ಪು?
ಒಳ್ಳೆಯ ಭವಿಷ್ಯಕ್ಕೆಂದರೆ ಅರ್ಥೈಸಿ ಒಪ್ಪು!
ಆಗಬಹುದು ಕಷ್ಟ ಒಪ್ಪಲು ಆ ಸತ್ಯ
ಹಾಗೆಂದು ಬಿಕ್ಕಲಾದೀತೇ ಕೂರುತ್ತ ನಿತ್ಯ?
ಬೀಳ್ಕೊಡಬೇಕು ಕೆಲವನ್ನು ಹಾದಿಯ ಮಧ್ಯೆಯೇ
ಮುಂದುವರೆಯಲು, ಮತ್ತೆ ನಡೆಯಲು!
ಬಾಳಿನ ಹಿತಕ್ಕಾಗಿ ಮರೆಯಬೇಕು ಈ ಪ್ರವಾಹ
ಆಗಲೇ ಬೆಳಗುವುದು ಮನೆ, ಮನಗಳು ಪುನಹ..
ಬೇವು ಬೆಲ್ಲದಂತೆ ಅಷ್ಟೇ ಈ ಸಮಯ
ಒಂದಷ್ಟು ಕಹಿ, ಅಗೆಯೋಣ ಒಟ್ಟಾಗಿ
ಇದ್ದೆ ಇರುವುದು ಸಿಹಿ ಮುಂದೆ ಗುಟ್ಟಾಗಿ!!
ಕಾಡದಿರಲಿ ಆ ನೆನಪು ಕಹಿಯಾಗಿಯೇ ಎಂದೆಂದೂ
ಸಿಹಿಯ ಬದುಕಿಗೆ ಆಗಬಾರದಲ್ಲವೇ ಅದು
ಮುಳ್ಳಾಗಿ ಇನ್ನೆಂದೂ..!!
ಮತ್ತಷ್ಟು ಪ್ರೀತಿ, ಮಗದಷ್ಟು ರೀತಿ
ಕೊಡುವೆನು ಎಂದೆಂದೂ ನಾ ಸಂಪ್ರೀತಿ..
No comments:
Post a Comment