ಸೋಲುತಿದೆ ಮನವು
ನಿನ್ನಯ ನೋಟಕೆ ಇಲ್ಲೆ
ಕಣ್ಣ ಸಪ್ಪಳಕೆ ಬೆರಗಾಗಿ
ನೋಡುತಿರುವೆನು
ರೆಪ್ಪೆಯ ಬಡಿದು ನೀ ಕಾವ್ಯ ಒಸರುವಾಗ
ಮುಂದೆ ಕೂತ ನಾನು ಕವಿಯಾದೆ..
ಇಂಥ ಮೌನದ ಅಮಲು
ಏಕೆ ನಿನ್ನಲ್ಲಿ?
ಪ್ರಜ್ಞೆ ತಪ್ಪಿತು ನನಗೆ
ಆ ಗಾಢತೆಯ ಒಳಗೆ
ತುಸು ನಾಚಿಬಿಡು ಅಲ್ಲೆ
ನನ್ನ ಕಾವ್ಯಕನ್ನಿಕೆ!!
ವಿರಹವ ತಾಳಲಾಗದೆ ಬಳಲುವ
ಮನಕೆ
ನಿನ್ನ ನಗುವೊಂದೆ ಔಷಧಿ
ಹೆಚ್ಚಾದರೂ ಸರಿಯೇ
ಹರಿಸಿಬಿಡು ಹಾಗೆ..
ಕಿವಿಯೋಲೆಯ ಸರಸಿ
ಗುಟ್ಟೊಂದು ಹೇಳುವುದಿದೆ
ಮುದ್ದಿಸಲು ನೆಪವೊಂದು ಬೇಕು!!
ತುಟಿ ಅಂಚಲಿ
ಸೂಸುತಿರುವ ಜೇನಲ್ಲಿ
ನಿನ್ನ ಅದ್ದು ಮುದ್ದಿಸುವೆ
ಅಪ್ಪಿಬಿಡು ಎದೆಯ
ಕಾರ್ಮೋಡಗಳು ಸೇರಿದಂತೆ..
- ಅ.ರಾ.ತೇ
#ಎಂ.ಎಚ್

No comments:
Post a Comment