Saturday, November 12, 2011

ಬಡವನೆಂಬ ಭೇದವೇಕೆ?



ಕೆರೆಯ ನೀರನು ಕೆರೆಗೆ ಚೆಲ್ಲಿ
ವರವ ಪಡೆದವನಂತೆ ಕಾಣಿರೋ!
ಈ ಸಾಲು ಈ ಕಾಲಕ್ಕೆ ಹೇಗಿದೆಯೆಂದರೆ
ಶ್ರೀಮಂತರು ಹಣವನ್ನು ಶ್ರೀಮಂತರಿಗೆ ಕೊಟ್ಟು
ತಾವು ದಾನಿಯಂತೆ ತೋರಿದ ಹಾಗೆ


ಸಿರಿವಂತರ ಸಂಪತ್ತು ಪರ್ವತಗಳ ದಾಟಿ ಮುನ್ನುಗ್ಗುತಿದೆ
ಬಡವರ ಕಷ್ಟ-ನೋವುಗಳು ಸಮುದ್ರದ ಆಳಕ್ಕೆ ಇಳಿಯುತಿದೆ
ಇದು ಸಾಲದೆಂದು ಬಡವರ ಮೇಲೆ ಭ್ರಷ್ಟತನ
ಇದರಿಂದ ಬಡವರಿಗೆ ಬಡತನದ ಆನರ್ತನ
ಹಣವಂತರಿಗೆ ಮತ್ತಷ್ಟು ದುಡ್ಡು ಶೇಕರಣೆಯ ಚಿಂತೆ
ಬಡವರಿಗೆ ಒಂದೊತ್ತು ಊಟವಿಲ್ಲದೆ ಸೇರುವರು ಚಿತೆ
ಸಂಪತ್ತು ಎಷ್ಟಿರಲಿ, ಹಣದಲ್ಲೆ ಮನೆ ಇರಲಿ
ಕಡೆಗೆ ದೇಹ ಸೇರೋದು ಮಣ್ಣಿಗೆ ಅಲ್ಲವೇ?

ಶ್ರೀಮಂತ-ಬಡವ ಎಂಬ ಬೇಧ-ಭಾವ ಏತಕೆ ಹೇಳಿ?
ಬದುಕುವ ಈ ಮೂರು ದಿನದಿ ಹಂಚಿಕೊಂಡು ಬಾಳಿ
ಆತ ಬಡವನೆಂದು ದಬ್ಬಾಳಿಕೆ ಮಾಡುವ ಬದಲು
ಅವನಿಗೆ ನೆಲೆ ನೀಡಿ, ಬಿಡಬಹುದಲ್ಲವೇ ಬದುಕಲು.

ಅಳೆಯಲು ಹೋದರೆ ಸಿರಿವಂತರ ಮನುಷ್ಯತ್ವವ-
ಮುಗ್ಗರಿಸಿ ಬೀಳುವೆವು.
ಅರಿತರೆ ಸಾಕು ದೀನರ ಪ್ರೀತಿ ವಿಶ್ವಾಸವ,
ಬಾಳಲ್ಲಿ ಸಾಕಷ್ಟು ಕಲಿವೆವು
ಹಣದ ದೌಲತ್ತಲಿ ಬಡವರ ತುಳಿಯದಿರಿ
ದೀನರು ಸಹ ಮನುಜರು ಎಂಬುದ ಮರೆಯದಿರಿ
ಬಡತನ ನಿರ್ಮೂಲನೆಯೇ ದೇಶದ ಏಳಿಗೆ
ಇದನರಿತು ನಡೆಯಬೇಕು ಯುವ ಪೀಳಿಗೆ


No comments:

Post a Comment